ರಾಜರ ಊರಲ್ಲಿ ‘ಅಜರಾಮರ’
Posted date: 01 Wed, Apr 2015 – 08:37:37 AM

ಅಭಯ್ ಜಿ ಗಂಜ್ಯಲಾ ಅವರ ಅಭಯ್ ಸಿನೆಮಾ ವಿಶನ್ ಅಡಿಯಲ್ಲಿ ಪ್ರಥಮ ನಿರ್ಮಾಣದ ಚಿತ್ರ ‘ಅಜರಾಮರ’ ಅರಮನೆಗಳ ನಗರ, ರಾಜರು ಆಳಿದ ನಾಡು ಮೈಸೂರಿನಲ್ಲಿ ಚಿತ್ರೀಕರಣ ನಡೆಸುತ್ತಾ ಇದೆ. ‘ಅಜರಾಮರ’ ಆಗಿ ಉಳಿಯಲು ನಾಯಕ ಕೈಗೊಳ್ಳುವ ಕೆಲಸ ಎಂತಹುದು ಎಂದು ನಿರ್ದೇಶಕ ರವಿ ಕಾರಂಜಿ ಮೊದಲ ಸಿನಿಮಾದಲ್ಲಿ ವಿವಿ? ಜವಾಬ್ದಾರಿಗಳನ್ನು ತೆಗೆದುಕೊಂಡು ಪ್ರಯತ್ನ ಮಾಡುತ್ತಾ ಇದ್ದಾರೆ. ದೂ?ದರ್ಶನದಲ್ಲಿ ಸಾಕ್ಷ್ಯ ಚಿತ್ರ ಹಾಗೂ ಕೆಲವು ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದ ಅನುಭವ ರವಿ ಕಾರಂಜಿ ಅವರಿಗಿದೆ.
ಮಡಿಕೇರಿ ಮೂಲದ ರಣ??ರ್ ಮೂಲತಹ ಜಾಹೀರಾತು ವಿಭಾಗದಲ್ಲಿ ಪಳಗಿದವರು ಈ ಚಿತ್ರ ಕಥಾ ನಾಯಕ. ಈ ಚಿತ್ರದಲ್ಲಿ ಬುದ್ದಿವಂತ ಅನಾಥನಾಗಿ ಹಳ್ಳಿಯಿಂದ ನಗರಕ್ಕೆ ಬಂದು ಸಾಧನೆ ಮಾಡುವ ಹಾದಿಯಲ್ಲಿ ಇವರಿಗೆ ನಾಯಕಿ ನೆರವಾಗುತ್ತಾರೆ.
ಚಿಕ್ಕ ವಯಸ್ಸಿನಲ್ಲೇ ಅಭಿನಯ ಮಾಡಿ??? ಮೈಸೂರಿನ ಹುಡುಗಿ ರೋಷಣಿ ಪೂರ್ಣ ಪ್ರಮಾಣದ ನಾಯಕಿ ಆಗಿ ಸಂಪ್ರದಾಯಸ್ಥ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದಾರೆ. ಸುಚೆಂದ್ರ ಪ್ರಸಾದ್ ಮೇಷ್ಟ್ರ ಪಾತ್ರದಲ್ಲಿ, ಮಿತ್ರ ನಗಿಸುವ ಟ್ರಾಕ್?ಲ್ಲಿ ಇದ್ದಾರೆ.
ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಖ್ಯಾತಿ ಪಡೆದ ವಿಲನ್ ಮಧುಸೂಧನ್ ಕನ್ನಡ ಸಿನಿಮಾ ‘ಅಜರಾಮರ’ದಲ್ಲಿ ಹೆಜ್ಜೆ ಇಟ್ಟಿದ್ದಾರೆ.
ಹರಿ ನಾಯ್ಕ ಅವರ ಛಾಯಾಗ್ರಹಣ, ರಾಜ್ ಕಿಶೋರ್ ಅವರ ಸಂಗೀತ, ವಿಶ್ವ ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ, ರಾಜಕಮಲ್ ಹಾಗೂ ಹರೀಶ್ ಅವರ ನಿರ್ದೇಶನ ಸಹಾಯ ಒದಗಿಸುತ್ತಾ ಇದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed